ಬೆಳ್ತಂಗಡಿ: ಅಡಿಕೆಗೆ ಔಷಧ ಸಿಂಪಡನೆ ವೇಳೆ ಅಲ್ಯುಮಿನಿಯಂ ದೋಟಿ ವಿದ್ಯುತ್ ಹೆಚ್.ಟಿ. ಲೈನ್ ತಂತಿಗೆ ತಾಗಿ ವಿದ್ಯುತ್ ಶಾಕ್ನಿಂದ ವ್ಯಕ್ತಿ ಮೃತಪಟ್ಟಿರುವ ಘಟನೆ ಬೆಳ್ತಂಗಡಿ ತಾಲೂಕಿನ ಅರಸಿನಮಕ್ಕಿಯಲ್ಲಿ ಸಂಭವಿಸಿದೆ.
ಅರಸಿನಮಕ್ಕಿ ಉಡ್ಯೆರೆ ಕೃಷ್ಣಪ್ಪ ಕುಲಾಲ್ (49) ಮೃತಪಟ್ಟವರು. ಘಟನೆ ಸಂಭವಿಸಿದ ಕೂಡಲೇ ನೆಲ್ಯಾಡಿಯ ಆಸ್ಪತ್ರೆಗೆ ಸಾಗಿಸಲಾಯಿತಾದರೂ ಅದಾಗಲೇ ಅವರು ಕೊನೆಯುಸಿರೆಳೆದಿದ್ದಾರೆ.
ಮೃತರು ಪತ್ನಿ, ಪುತ್ರ ಹಾಗೂ ಪುತ್ರಿಯನ್ನು ಅಗಲಿದ್ದಾರೆ.