Home Karavali Karnataka ಕೆನರಾ ಬ್ಯಾಂಕ್ ನಿಂದ ಶ್ರೀ ಕೃಷ್ಣ ಬಾಲನಿಕೇತನಕ್ಕೆ ಆಟದ ಉಪಕರಣಗಳೊಂದಿಗೆ ಮರಳು ಗುಂಡಿ ಕೊಡುಗೆ….!!

ಕೆನರಾ ಬ್ಯಾಂಕ್ ನಿಂದ ಶ್ರೀ ಕೃಷ್ಣ ಬಾಲನಿಕೇತನಕ್ಕೆ ಆಟದ ಉಪಕರಣಗಳೊಂದಿಗೆ ಮರಳು ಗುಂಡಿ ಕೊಡುಗೆ….!!

ಉಡುಪಿ : ಕುಕ್ಕಿಕಟ್ಟೆಯ ಶ್ರೀ ಕೃಷ್ಣ ಬಾಲನಿಕೇತನಕ್ಕೆ ಮಕ್ಕಳಿಗಾಗಿ ಆಟದ ಉಪಕರಣಗಳೊಂದಿಗೆ ಮರಳುಗುಂಡಿಯನ್ನು ಕೆನರಾ ಬ್ಯಾಂಕ್ ನ ಸಾಂಸ್ಥಿಕ ಸಾಮಾಜಿಕ ಜವಾಬ್ದಾರಿಯ ಅಡಿಯಲ್ಲಿ ನೀಡಿದ್ದು ಅದರ ಹಸ್ತಾಂತರ ಮತ್ತು ಉದ್ಘಾಟನೆ ಯನ್ನು ಮಣಿಪಾಲ ವೃತ್ತ ಕಚೇರಿಯ ಜನರಲ್ ಮ್ಯಾನೇಜರ್ ಎಚ್. ಕೆ ಗಂಗಾಧರ್ ಅವರು ನೆರೆವೇರಿಸಿ ಬ್ಯಾಂಕ್ ಮಕ್ಕಳಿಗಾಗಿ ನೀಡಿದ ಈ ಕೊಡುಗೆಯ ಸದುಪಯೋಗ ಪಡೆದುಕೊಳ್ಳಬೇಕೆಂದು ಹೇಳಿ, ಶುಭ ಹಾರೈಸಿದರು.

ಪ್ರಾರಂಭ ದಲ್ಲಿ ಸಂಸ್ಥೆಯ ಕಾರ್ಯದರ್ಶಿ ರಾಮಚಂದ್ರ ಉಪಾಧ್ಯಾಯರು ಸ್ವಾಗತಿಸಿ ಪ್ರಾಸ್ಥಾವಿಕ ನುಡಿಗಳನ್ನಾಡಿದರು.

ಈ ಸಂದರ್ಭದಲ್ಲಿ ಮಣಿಪಾಲ ವೃತ್ತ ಕಚೇರಿಯ ಉಪ ಮಹಾ ಪ್ರಬಂಧಕ ಪಿ. ಕೆ ದಾಸ್, ಸಂಸ್ಥೆಯ ಉಪಾಧ್ಯಕ್ಷ ಪ್ರೊ. ಕಮಲಾಕ್ಷ, ಸಂಸ್ಥೆಯ ರಘುರಾಮಾಚಾರ್ಯ, ಬಿ. ಕೆ ನಾರಾಯಣ, ಕೆ. ಸುಬ್ರಮಣ್ಯ ಕಾರಂತ, ಮಾತಾಜಿಯವರು ಮತ್ತು ಮಕ್ಕಳು ಉಪಸ್ಥಿತರಿದ್ದರು.

ಗುರುರಾಜ್ ಭಟ್ ಕಾರ್ಯಕ್ರಮ ಸಂಯೋಜಿಸಿ ಧನ್ಯವಾದ ಸಮರ್ಪಿಸಿದರು.